Tuesday, February 21, 2012

ಬ-ಕಾರದಾ ಭಾವ


ಭಾವದಾ ಬೆಳಕು ಬದುಕಿನಲಿರಲು...
ಬೇಡದಾ ಬಯಕೆ ಬೆಳೆಯುತಿರಲು..
ಬದುಕಲೇಕೆ ಬಟಾಬಯಲಲಿ...

ಬೇಯಲೇಕೇ ಬಿಸಿಲ ಬೇಗೆಯಲ್ಲಿ...

ಬಣ್ಣದಾ ಬಾನಿನಲ್ಲಿ... ಬೆನ್ನತ್ತಿದಾ ಬಿಂದುವಂತಾಗುವಾ ಬದಲು...

ಬಿತ್ತಿ ಬೆಳೆಯಬಾರದೇಕೆ ಪ್ರೀತಿಯಾ ಬಳ್ಳಿ...


-----by
ರಘುರಾಮ್ ಜೋಶಿ

ಬಯಲಿದು.....




Hey friends .... ಇದು "ROCK STAR" ಚಿತ್ರದ "Aur ho" ಹಾಡಿನ tune ಗೆ ಕನ್ನಡದಲ್ಲಿ ಸಾಹಿತ್ಯ ಬರ್ದಿದೀನಿ ....


ನನ್ನ ಬದುಕಿನ ಈ ಬಯಲಲಿ....
ಹಾಗೇ ಸುಮ್ಮನೆ ಕೇಳಿದೆ...
ನಾ ಕೂಗಿ ಕರೆದ ಸ್ವರ ಕೇಳೀತೆ...?
ಕಣ್ಣ ಬಿಂದು ಬಂದು ಏನಂದಿತೇ...?
ಬೇಕಾದ ನೆನಪೆಲ್ಲ ನಕ್ಕಿತು.. ಅತ್ತಿತು..
ಈ ಕ್ಷಣದಲಿ ನಾನೇನಾದೇ...?(2)
ಈ ಕ್ಷಣದಲಿ ನಾನೇನಾದೇ... ಕೇಳಿತು ಮನ ಕೇಳಿತು...
ಸೆಳೆತವು ಸೆಳೆತವು.. ಉಸಿರಿನ ಬಡಿತವು ಹೃದಯವು ಚೀರುತಿದೆ (2)
ಸೆಳೆತವು ಸೆಳೆತವು.. ಉಸಿರಿನ ಬಡಿತವು..... ಕೇಳಿತು ಏಕೆಂದೂ..
ನಿನ್ನ ಬದುಕಿನ ಗುರಿಯನು ತಿಳಿಯೇನು... ಈಗಲೇ || ||

ಮನ ನಿನ್ನದು ನೀ ತಿಳಿದುಕೋ...
ಅದು ನಿನ್ನದು ತಿಳಿ ಹೇಳಿಕೋ....
ಈ ಕ್ಷಣದಲಿ ನೀನೇನಾಗಿರುವೇ...?
ಈ ಕ್ಷಣದಲಿ ನೀನೇನಾಗಿರುವೇ.. ನೀ ನೋಡಿಕೋ ನಿನ್ನ ಬಿಂಬವ
ಜಾರಿದೆ ಜಾರಿದೆ ಕಣ್ಣಿನ ಹನಿಯಿದು ನಿಲ್ಲದೇ ಸರಿಯುತಿದೆ.. (2)
ನೋವಿನ ಮುಳ್ಳಲಿ ಹೃದಯವು ಒಡೆದಿದೆ... ಕೂಡಲು ಬರಬಹುದೇ...
ನಾ ಕಡಲಲಿ ದಾರಿಯ ಹುಡುಕುತ ಹೊರಟಿರುವೇ.... ರಕ್ಷಿಸೋ ಹರಿಯೇ.
ನಾ ಕಟ್ಟಿದ ಕನಸು ಗಾಳಿಗೆ ತೂರುತಿದೆ... ಕನಸೇನಾ ಇದುವೇ....
ಓ ಹೃದಯವೇ ನೀ ಕುಳಿತಿಹೆ ಓಡು ಓಡು ಈಗ ಕನಸೊಡನೆ
ಬದುಕಿದು ಬದುಕಿದು ನೊವಿನ ಸಾಲಿದು ನಕ್ಕರೆ ನೀ ಗೆಲುವೇ... (2)

ನೀನೆಂದೂ ನಗು, ಕಾರ್ಮೋಡ ಇದು..
ಬಿಸಿ ಗಾಳಿ ಬೀಸಲು.. ನೀ ಉಸಿರಾಡು..
ನಡಿತಾನೇ ಇರು.. ಬಿರುಗಾಳಿಯಾದರೂ..
ಕನಸೊಡನೆ.. ಸಹನೆಯಲಿ.. ಬರಡಿರುವಾ ಭೂಮಿಯೊಡನೆ..

ಅಬ್ಬರಿಸಿ.... ಸಿಡಿ ಸಿಡಿ ಸಿಡಿಲಿದು ಬೆಳಗಿದೆಯೋ..
ಹನಿ-ದನಿ ಮೊಳಗಲು ಚಿಗುರಿಹುದೋ..
ನನ್ನ ಬದುಕಿನ ಈ ಬಯಲಲಿ..
ನನ್ನ ಬದುಕಿನ ಈ ಬಯಲಲಿ ..||


-----by ರಘುರಾಮ್ ಜೋಶಿ


ಬದುಕಿದು ಮರಳ ತೀರ...





ಮರಳಿನ ತೀರದಂಥಾ ಬದುಕಿದು..
ಗಾಳಿಯಂಥಾ ಕಾಲವು..
ಬೀಸಿ ಬರುವ ದಿಕ್ಕು ತೋಚದು..
ಬೀಸುವುದು ಮಾತ್ರ ನಿಲ್ಲದು..
ಸೋಕಿ ಹೋದ ಗಾಳಿ ಮತ್ತೆ ಬರಲಿನ್ನು ಸಾಧ್ಯವೇ..?

ಹೇಳುತಿರುವಂತೆ ಅನಿಸುತಿದೆ ಏನೋ ಈ ಅಲೆಗಳು..
ಅಲೆಗಳಂತೇ ಕಡಲಾಳದಿಂದ ಎದ್ದು ಬಂದ ನೆನಪುಗಳಿಹುದು...
ಸ್ವರಗಳಂತೆ ಶಬ್ಧವು... ಖುಷಿಯ ಅಲೆಗಳಾಗಿ ಸೇರಿ..
ಹೃದಯವ ತಣಿಸಿಹುದು..

ವೀಣೆಯಾ ತಂತಿಯಂತೆ ಕಡಲಿನಾ ಅಲೆಗಳು..
ಕೊಳಲಿನಂತಾದ ಕಡಲ ತೀರವು..
ಕಿವಿಯ ತೂತನು ಗಾಳಿ ಸೇರಿ ನುಡಿಸುತಿಹುದು ಸುಶ್ರಾವ್ಯವ...
ಇಟ್ಟ ಹೆಜ್ಜೆಯಂತೆ ನೆನಪುಗಳು ..
ಅಳಿವುದೆಂದೋ, ಬದಲಾಗುವುದೆಂದೋ ಅಲೆಗಳಾ ಹೊಡೆತಕೆ.
ಕಳೆದ ಹೆಜ್ಜೆ ಗುರುತನು ತಿರುಗಿ ನೊಡಲೇಕೆ...?
ತಂಪು ಗಾಳಿಯಿರಲು ನಗುವಿನಾ ಸಂಜೆಯಲ್ಲಿ..
ನಡೆಯಬಾರದೇಕೆ ಹಿಂದೇಟಿಲ್ಲದೆ.
ಆಗಬಾರದೇಕೆ ಪುಟ್ಟ ಮಗುವಿನಂತೆ...
ರಂಗುರಂಗಿನಾ ಕಿರಣ ಭುವಿಯ ತಾಕಲು
ಸಾರ್ಥಕತೆಯ ಬೆಳಕು ನೀನಾಗಲು.

-----by ರಘುರಾಮ್ ಜೋಶಿ

ಇಲ್ಲ..... ನಾವೇ ಮೂರ್ಖರು...



He never leaves us in the first place. When we cry, he's right there.

ನಾವು ಅಂದ್ಕೊಂಡಿದ್ದೆಲ್ಲ ಸಿಕ್ ಬಿಟ್ರೇ ಏನು ಉಳ್ದಿರ್ತಿರ್ಲಿಲ್ಲ ನಮ್ life ಅಲ್ಲಿ ಮಾಡ್ಲಿಕ್ಕೆ ..
ವೊಂಥರಾ boring ಆಗೋಗಿರೋದು ಅಲ್ವ....
ಅದಿಕ್ಕೇ ಅವನಿಗೆ ಎಲ್ಲ ಗೊತ್ತು ಕಣ್ರೀ...

ಬರಗಾಲ ಬಂದು ಭೂಮಿ ಒಣಗಿ ಬರಡಾದಾಗ ಮಾತ್ರ ನೀರಿನ ಹನಿಯ ಬೆಲೆ ಗೋತ್ತಾಗೋದು...

So.......

ನಿಮ್ಮ ಬದುಕು ಅನ್ನೋ ಭೂಮಿ ಇನ್ನೂ ಬರಡಾಗಿಲ್ಲ ಕಣ್ರೀ, ಸುಮ್ನೆ ಬೇಡದೆ ಇರೋದನ್ನ ಮಾಡಿ..
ಬೇಡದೆ ಇರೋ ಥರ ಯೋಚನೆ ಮಾಡಿ..... ಸುಮ್ನೇ ಬರಡು ಮಾಡ್ಕೋಬೇಡಿ.....
ಎಲ್ಲಾರೂ ಅವನ ಮಕ್ಕಳೇ ಕಣ್ರೀ...
ಯಾರನ್ನೂ ಅಷ್ಟು ಸುಲಭವಾಗಿ ಬಿಟ್ಟು ಕೊಡಲ್ಲಾ ಅವ್ನು...
ಸ್ವಲ್ಪ ಪರೀಕ್ಷಾ ಪ್ರಿಯ ಅಷ್ಟೇ...

ಇಲ್ಲ.... ನಾವೇ ಮೂರ್ಖರು... ಯಾಕೆ ಗೊತ್ತಾ...

ಭೂಮಿ ಬರಡಾಯ್ತು ಅಂದ್ ಕೂಡ್ಲೆ ಕಾರಣ ತಿಳಿದು ಕೊಳ್ಳದೇ, ಹುಡುಕದೇ ವಿನಾಕಾರಣ ಅವನನ್ನ ಬಯ್ಯುತ್ತಾ, ಶಪಿಸುತ್ತಾ ಕಾಲ ಕಳಿತೀವಿ...
There is a reason for everything..There is no accident in our Life.. Everything happens for some reason.. ಅನ್ನೋದನ್ನ ಅರ್ಥನೇ ಮಾಡ್ಕೊಳೋದಿಲ್ಲ..
ವೇಳೆಗಾಗಲೇ ಜೊರು ಮಳೆ ಬರತ್ತೆ... ಮತ್ತೇ ಸಮಾಧಾನ ಆಗತ್ತೇ... ಖುಷಿ ಆಗತ್ತೇ..
ಭುವಿ ತುಂಬಾ ಹಸಿರಾಗುತ್ತೆ... ಒಳ್ಳೆ ಪರಿಮಳ ಸೂಸತ್ತೆ.... ಅದೇ ಗುಂಗಲ್ಲೇ ಮೈ ಮರಿತೀವಿ...

ಆಗ ಅದೆಲ್ಲಿಂದ ಬರುತ್ತೋ ಗೊತ್ತಿಲ್ಲ ದುರಹಂಕಾರ ಅನ್ನೋದು ನಮ್ಗೆ...
ಹಳೆಯ ಕಷ್ಟ ಮರೆತು ಹೋಗಿರುತ್ತೇ, ಹಳೆಯ ಬಂಧ ಮರೆತೋಗಿರುತ್ತೆ.... ಮುಂದೆ ನೋಡುವ ಕಣ್ಣು ಕುರುಡಾಗಿರುತ್ತೇ...
ಅಮಲಿನಲ್ಲಿ ಏನೆನೋ ಅಂತೀವೀ... ಮಾಡಿದ್ದು, ಅಂದಿದ್ದು ಅರಿವಿಗೆ ಗೊತ್ತೇ ಆಗಿರಲ್ಲ.....
ಆಗ ಅವನನ್ನ ಮರೆತೇ ಬಿಟ್ಟಿರ್ತೀವಿ

ಸುರಿಸ್ತಾನೆ ಮಳೆನ ಜೋರಾಗಿ..... ಅತಿಯಾಗತ್ತೇ... ಪ್ರವಾಹ ಶುರುವಾಗತ್ತೇ....
ಮತ್ತೆ ಅದೇ... ಶಪಿಸುತ್ತಾ, ಬಯ್ಯುತ್ತಾ ಕೂರ್ತಿವಿ... ಆಗಲೂ ಕಾರಣ ಅರಿತು ಕೊಳ್ಳಲಿಕ್ಕೆ ಕನಿಷ್ಠ ಪ್ರಯತ್ನ ಕೂಡ ಮಾಡೋದಿಲ್ಲ ನಾವು...
ಕೂಗೋದು, ಚೀರೊದು ನಿಲ್ಸಲ್ಲ.... ಆಗೋದು ನಿಲ್ಲಲ್ಲ...

ಇಲ್ಲ... ಅವನನ್ನ ಅರ್ಥನೇ ಮಾಡಿಕೊಳ್ಳೊದಿಲ್ಲ ನಾವು.....
ಆದ್ರೆ ಅವ್ನು ಮಾತ್ರ ನಾವೇನೇ ಮಾಡಿದ್ರೂ ಪ್ರೀತ್ಸೊದು ಮಾತ್ರ ಬಿಡಲ್ಲ... ಪ್ರೀತಿಸ್ತಾನೇ ಇರ್ತಾನೆ....
ಮಾತಾಡಿಸಿ ಹೇಳೊಣವೆಂದ್ರೇ.... ಕೇಳೋ ಕಿವಿ, ಕಣ್ಣು ಏನೂ ಇಲ್ವೇ ನಮ್ಗೆ...
ಎರಡನ್ನೂ ಏನೇನಕ್ಕೋ ಉಪಯೊಗಿಸ್ತೀವಿ ಇದೊಂದಕ್ಕೆ ಬಿಟ್ಟು...

ಪರಮಾತ್ಮ ಅವನು ಹೇಳಿದ್ದನ್ನ ಕೇಳಲಿಕ್ಕೆ, ಕಾಣಲಿಕ್ಕೆ ಅಂತನೇ ಹೃದಯ ಅನ್ನೋದನ್ನ ನಮಗೆ ಕೊಟ್ಟಿದಾನೆ ಕಣ್ರೀ...
Heart is a pure soul of a god..
Atleast.. ಹೃದಯ ಹೇಳಿದ್ದನ್ನಾದ್ರೂ ಕೇಳಬೇಕಲ್ಲ ನಾವು .......ಊಹ್ಹೂ ... ನಾವ್ ಕೇಳಲ್ಲ....
ಅದಿಕ್ಕೇ ಅತಿವೃಷ್ಠಿ, ಅನಾವೃಷ್ಠಿ........ ಆಗಲಾದ್ರೂ ನಮ್ಗೆ ಅವನ ನೆನಪಾಗತ್ತೇನೋ ಮರೀದೆ...
ಅವನ ಮಡಿಲಲ್ಲೇ ಮಗುವಾಗಿರಬಹುದೆಂದು
ನಮ್ಮನ್ನು ನೋಡ್ಕೊಂಡು ಅವ್ನು ಅದೆಷ್ಟು ನೋವು ಅನುಭವಿಸ್ತಾ ಇರಬಹುದೋ ಎನೋ.... ಅಲ್ವ..?
ಅವ್ನಾದ್ರೂ ಏನು ಮಾಡ್ತಾನೆ ಹೇಳಿ... ತನ್ನ ಮಕ್ಕಳಿಗೆ ನೋವಾದ್ರೂ ಧರ್ಮಕ್ಕಾಗಿ, ಒಳ್ಳೆಯದಕ್ಕಾಗಿ ಚಾಟಿ ಬೀಸ್ತಾನೆ ಇರ್ತಾನೆ........
ಇಲ್ಲ.... ನಾವೇ ಮೂರ್ಖರು....

ನಾವು ಕೊನೇತನಕ ಬಯಸೋದು ಅಂದ್ರೇ ನಮ್ಮದೊಂದೇ ಸುಖ, ಸಂತೋಷ, ರಕ್ಷಣೆ ಮಾತ್ರವೆ.... ಪಕ್ಕದಲ್ಲಿರೋರು ಚೀರಾಡ್ತಾ ಸಾಯ್ತಾ ಇದ್ರೂ ಕೂಡ....
ಅದ್ ಬಿಟ್ರೇ ಇನ್ನೇನು ಬೇಡ ನಮಗೆ.... ದುಃಖನೇ ಬೇಡ ಅಂತೀವೀ.....
Ready- ನೇ ಇರಲ್ಲ ನಾವು ಕಷ್ಟ ಅನುಭವಿಸೋದಕ್ಕೆ...
ಆಮೇಲೆ ಒದ್ದಾಡ್ತೀವಿ.... ಬದಲಾಗಿ ಏನೂ ಮಾಡಲ್ಲ... ಹಂಚಿ ತಿನ್ನೋ ಸ್ವಭಾವವೆ ಇಲ್ವ ಹಾಗಾದ್ರೇ....

ಕೊನೇತನಕ ಕೂಗೋದು ಬಿಡಲ್ಲ..... ಆಗೋದು ನಿಲ್ಲಲ್ಲ....
ಇಲ್ಲ..... ನಾವೇ ಮೂರ್ಖರು.....ಅಲ್ವ...? ಹಹ್ಹಹಹ್ಹ


-----by ರಘುರಾಮ್ ಜೋಶಿ




Sunday, October 16, 2011

ಯಾರು ನೀನು....!!!?



ಒಮ್ಮೆಯಾದರೂ ನೋಡಿದೀಯಾ
ಯಾಕೆ ಎಂದು ಕೇಳಿದೀಯಾ
ನಿನ್ನ ಹೃದಯದಿ ಹರಿವ ಒಂದು ಭಾವವ....
ಕಾಡಿ ಕಾಡಿ ಮೂಡೋ ಒಂದು ಉಧ್ಗಾರವ..

ಯಾರು ನೀನು....!!?
ಹ್ಞಾ....
ಏಕೆ ಹೀಗೆ
ಏನು ಹಾಗೆ
ಕನ್ನಡೀಲಿ ಕಣ್ಣ ಕಂಬನಿ ಹೊಳೆದ ಹಾಗೆ..
ಕೇಳಿದಾಗ ಏನೋ ಒಂದು ನುಡಿದ ಹಾಗೆ..
ಯಾರು ನೀನು....!!
ಕೇಳಿಲ್ಲಿ.....
ಒಮ್ಮೆ ನೀನು ಕೇಳು ನಿನ್ನಯ ಹೃದಯದಲ್ಲಿರೋ ಸತ್ಯವ...
ನೀನು ಏಕೆ ಹೀಗೆ ಆದೆ ಎಲ್ಲಿ ಹೋಯಿತು ಭಾವನೆ...
ಭಾವವೆಲ್ಲ ಮಾಸಿಹೋಗಲು ನೀನು ಏಕೆ ಇಲ್ಲಿಹೆ....

ಆಸೆಯೆಂಬ ನಶೆಯಲಿರಲು, ಸೋಲು ಕಂಡರೆ ದ್ವೇಷವೇ..?
ಗೆಲುವೇ ಬೇಕು ಎಂದು ನುಡಿವ, ಮನಕೆ ಸೋಲು ಪಾಠವು...
ಬಿದ್ದ ನಂತರ ಕಲಿತ ಪಾಠವ ಎದ್ದು ನಿಂತು, ನಿದ್ದೆಗೆಟ್ಟು ಮರೆಯಬೇಡ...

ಕೇಳುವುದಿಲ್ಲವೇಕೆ ನಿನಗೆ ಪಕ್ಕದಲ್ಲಿರೋ, ಮನದ ಮಾತು..
ಏಕೆ ಹೀಗೆ ಕಿವುಡನಾದೆ, ನಾದ ಕೇಳದೇ ದೂರ್ತನಾದೆ..
ಮನದ ಮಮತೆಯು ತಿಪ್ಪೆಯಲ್ಲಿ, ಎಲ್ಲಿ ಹೋಯಿತು ನಿನ್ನ ತನವು ?...
ಜನರ ಹೃದಯ ಕೊಳಚೆಯೇಕೆ, ಹುಳುವು ಹುಟ್ಟಿ ಕೆಡಿಸಲು..

ಕಾಡೊದಿಲ್ಲವೇ? ಒಮ್ಮೆಯಾದರೂ.....
ಏಕೆ ನೀನು ಹೀಗೆಯೆಂದು..?

ಕನಸ ಕಟ್ಟಿ ಗೂಡ ಹೆಣೆದು...
ಎಲ್ಲಿ ಹೋದೆ ಹಾರಿ ದೂರ.
ತಡೆವೆ ಏಕೆ ಹರಿವ ನದಿಯ...
ಕಟ್ಟಲೇಕೆ ಗೋಡೆಯ.
ಏಕೆ ಬಯಸುವೆ ಸುಖವ ಮಾತ್ರವೇ...
ಸಾರವಿಲ್ಲದ ಹಿಂಡಿದಂಥ ಹಣ್ಣಿನಂತೆ.
ರುಚಿಯ ಅಡುಗೆಯು ಸಿಗುವುದಾಗ...
ಹುಳಿಯು ಕಹಿಯು ಸಿಹಿಯು ಎಲ್ಲ ಇರಲು ಸವಿಯಲು.
ಇದುವೇ ಜೀವನ.. ಗಾಳಿಯಂತೆ ಬೀಸಲೀಗ...
ಬಯಸಲೇಕೆ ನಿಯಂತ್ರಿಸಲು.
ಅದರ ಪಾಡಿಗೆ ಹರಿಯ ಬಿಡಲು...
ತಂಪು ನಿನ್ನದು ಎಂದಿಗೂ.
ಏಕೆ ನೀನು ಇಲ್ಲಿ ಬಂದಿಹೆ.. ಏನು ಸಾಧಿಸ ಹೊರಟಿಹೆ......

ಕಣ್ಣ ಬಿಂಬದಲ್ಲಿ ಕಾಣೋ ಬಿಂಬ
-ದಂತೆ ಮನದ ಪ್ರಶ್ನೆಯು...
ಯಾರು ನೀನು ಎಂದು ಕೇಳಿಕೋ...
ನಿನ್ನ ಹೃದಯವ ತೆರೆದು ಇಟ್ಟುಕೋ...
ಸ್ವಚ್ಛವಾದ ಭಾವವೆಂಬ ದೇವರಲಿ.
ಪುಟ್ಟ ಮಗುವ ನಗುವಿನಂತೆ
ಚಿಗುರು ಒಡೆದ ಬಳ್ಳಿಯಂತೆ
ಹೂವಾಗ ಹೊರಟ ಮೊಗ್ಗಿನಂತೆ
ಮುಗ್ಧವಾದ ಮಗುವ ಮನದಲಿ ಮೂಡೋ ಆ ಮೌನದಂತೆ...
ಏಕೆ ಇನ್ನು ಮುಸುಕು ನಿನಗೆ.....
ಹಕ್ಕಿಯಂತೆ ಹಾರಬಯಸಲು.
ಹೃದಯವಾಗ ನಗುವುದೀಗ ನಿನ್ನ
ಆ ಹುಚ್ಚಾಟಕೆ...
ನಿನ್ನ ಆ ಹೆಬ್ಬಯಕೆಗೆ...
ನಿನ್ನ ಪೆದ್ದು ಯೋಚನೆಗೆ...
ಯಾರು ನೀನು......!! ಎಂದು ಕೇಳಿಕೋ...
ಒಮ್ಮೆ ನೀನು.........
ಏಕೆ ಬಂದಿಹೆ ಎಂದು ಕೇಳಿಕೋ
ಯಾರು ನೀನು.....!! ಯಾರು ನೀನು.....!!

---------ರಘುರಾಮ್ ಜೋಶಿ---------

Thursday, July 21, 2011

ನೋಡಿಕೋಳ್ತಿಯಾ... ನನ್ನ ಹೃದಯವ!!......


ನನ್ನ ಮನಸು ಎಲ್ಲೊ ಇದೆ..
ಮನಸ ಮಾತು ಇನ್ನೊಂದಿದೆ...
ಸ್ವಲ್ಪ ಕೇಳು ನೀ ಇಲ್ಲಿಯೇ...
ಸ್ವಲ್ಪ ಜಾಸ್ತಿ ಆಗಿಲ್ಲವೇ...
ಕನಸ ಬಿಟ್ಟು ಹಾರಿ ಹೋಗಿದೆ..
ನನ್ನ ಹೃದಯದಲೀಗ ಜ್ವಾಲೆ ಹೊತ್ತಿದೆ ||

ಈ ಪ್ರೀತಿಯು ಕಣ್ಣಂಚಲ್ಲಿ ಕಣ್ಣ ಹನಿಯಾಗಿ ಬಿದ್ದಂತಿದೆ...
ನನ್ನ ಕನಸಲ್ಲಿ, ಆ ರಾತ್ರೀಲಿ ನಿನ್ನ ಬಿಂಬ ನೀರಲ್ಲಿ ಮುದ್ದಾಗಿ ಕಂಡಂತಿದೆ...
ಒಂದು ಮೌನ ಬರೆದ ಸಿಹಿಯಾದ ಪ್ರೇಮ ಬೆಳದಿಂಗಳಾ ಬೆಳಕಲಿ ತಂಪಾದ ಗಾನ..
ಹಸಿರಿನೆಲೆಯ ಮೇಲೆ ನಿದ್ರಿಸಿರುವ ಆ ಪುಟ್ಟ ನೀರ ಹನಿಗಳೇನಾ ನೀ..

ಕೆಸುವಿನೆಲೆಯ ಮೇಲೆ ಆಡ್ವಾ ಹನಿಗಳೇನಾ ನೀ ...
ಬೆಳಕಿನಾ ಕಿರಣ ನಾನಾಗಲು...

ಗರಿಯ ಕೆದರಿ ಕರೆವ ನಾನು ಬರವ ಕಳೆವ ಮೋಡದಂತೆ,
ಮುತ್ತನೀವ ದೇವತೆಯಾ ನೀ....ಆ ಅದ್ಭುತ ಸೌಂದರ್ಯವೇನಾ ನೀ....

ಬಿಡಲಾರೆ ಉಸಿರಾ ಸನಿಹಾನೆ ಸುಳಿವ ಸುಳಿಗಾಳಿಯಾಗಿ ,
ನೀ ಸ್ಪೂರ್ತಿಯಾಗುವವರೆಗೆ ....ಬಿಡಲಾರೆ ಉಸಿರಾ ||

ಹಸಿವನ್ನೇ ಸವಿವಾ ಮನಸಿಗೆ ಸಿಗುವಾ,
ನೋವ ಮರೆಸಿ ನಗಿಸಿ ಕುಣಿಸೋ ಮಳೆಯಾಗಬಾರದಾ......ನಿನಗೊಮ್ಮೆ ಮನಸಾಗಬಾರದಾ....

ವೀಣೆ ನುಡಿಸೋ ತಂತಿಯಾಗಿ ಸ್ವರದ ದನಿಯ ಕೇಳಿ ಬರುವ
ಖುಷಿಯ ಅಲೆಗಳಂತೆ ನಾವಿಬ್ಬರಾಗಬಾರದೆಕೇ...........ನೀ ಸ್ವಲ್ಪ ಕೇಳಬಾರದೇಕೆ.....

ಕಣ್ಣ ರೆಪ್ಪೆಯ ಕಷ್ಟ ಕಂಡು ಕಣ್ಣ ಕಂಬನಿ ಒರೆಸಲೆಂದು
ಕೈಯನಿತ್ತ ಹೃದಯ ನನ್ನದು...

ಸರಿಯಾಗಿ ನೊಡಿಕೋಳ್ತಿಯಾ ಈ ಎನ್ನ ಹೃದಯವ!!..... || ||


---ರಘುರಾಮ್ ಜೋಶಿ---


ಕೊನೆಯ ತನಕ....


ಎಲ್ಲೆಲ್ಲೂ ಪ್ರೇಮ..ನುಡಿದಿದೆ ಈ ಹೃದಯ ಜಗವ ನೋಡಿ...
ಎನ್ನ ಕಾಲು ನಿಲ್ಲುತಿಲ್ಲ...
ನಿಲ್ಲು ಎಂದರೂ ಕೇಳುತಿಲ್ಲ...

ಚಿಟ್ಟೆ ಹಾಗೆ ರೆಕ್ಕೆ ಬಲಿತು ಚಿಟಿಪಿಟಿ ಎಂದು ಹಾರಿ
ಸಾವಿರಾರು ರಂಗು ಚೆಲ್ಲಿ ಜಗಕೆ ಹರಡಿಹುದು....ಜಗವ ತಿರುಗಿಹುದು...
ಇದು ಪ್ರೇಮ... ಇದುವೇ ಪ್ರೇಮ....

ಕಡಲಲೆಯ ರಸಬಡಿತಗಳ ಬಹುದಾನಂದ..... ಆ ದಡಕಲ್ಲವೇ....
ಮರಗಿಡದ ಹೂವುಹಣ್ಣುಗಳ ಆ ಸಿಹಿಒಲವು ..... ಜೀವನಾಡಿಯದಲ್ಲವೆ....
ಸಿರಿತನದ ತೊರೆನದಿಗಳಂತೆ ಸಾಗರವ ಸೇರಿಹುದು...

ನೋಟದಲೆ ಸ್ವಲ್ಪ ಮಾತಾಡಿ...
ಹರಿದಾಡುವಾ.. ಮನವ ಹಿಡಿದೆಳೆವ
ವರವಾಗಿ ಕಣ್ಣಲ್ಲಿ ಕನಸಾಗಿ ...ದಿನವಿಡೀ ನಿದ್ದೆಯೇಲ್ಲಿ...
ನಿದ್ದೆ ಕದ್ದ ಚೊರನೇಲ್ಲಿ?...

ಜ್ವರವಿರಲು ಇದು ಜೊತೆಗಿರಲು ..
ಯಾರು ಏನೆಂದರೂ ಕೇಳುವುದಿಲ್ಲವೋ....

ತರಗೆಲೆಯಾ ಹಾಗೆ ಉದುರಿದರೂ..
ಚಿಗುರೆಲೆಯಲಿ ಹೊಸ ನಾಂದಿಯಾಗಿಲ್ಲವೇ ....ಇದು ಕರಗುವುದಲ್ಲವೋ..

ಸಿಗದಿರಲು.. ಒಂದಾಗದಿದ್ದರೂ ಇದು ಕೊರಗುತ ...ಕುರುವುದಿಲ್ಲವೋ..

ಇರುವರೆಗೂ ಕೊನೆ ಉಸಿರಿರಲು ಅದು ..
ನಗುನಗಲು ಸಾವೇ ಹೆದರಿಹುದೇ....

ಯಾರ್‍ಯಾರೋ ಎಲ್ಲೆಲ್ಲೋ ಸಿಕ್ಕಿರಲು ...
ಮತ್ತೆಲ್ಲೊ.. ಇನ್ನೆಲ್ಲೊ.. ಕಳೆದಿರಲು...
ಮುಂದೆಲ್ಲೊ ಕಾಯ್ದಿಡುವ ಸಿಹಿಯಾ ನೆನಪುಗಳಿದು...
ಮರೆಯಬೇಡವೆ... ||

ಇದು ಪ್ರೇಮ ...ಸಾವೇ ಇರದ...
ಕಡಲೊಳಗಡೆ ಕಾಣೋ ನೀಲಿ ಬಣ್ಣ!..

ಬಾನು ಬಾಗೋ ಭುವಿಯ ತಾಗೋ..
ಆ ತುದಿಯ.... ಕೊನೆಯ ಹಾಗೇ..

ಇದುವೇ...
ಮಳೆಯಹನಿಯು ಭುವಿಯಲರಳಿ ಪುಟ್ಟ ಹೆಜ್ಜೆ ಇಟ್ಟು ನಡೆಯೋ... ಕ್ಷಣದ ಹಾಗೇ....

ಇದುವೇ...
ಮನದ ಹೃದಯದಿ ಗೆಜ್ಜೆ ಕಟ್ಟಿ ...
ಕುಣಿದು ತಾಳದಿ ನಲಿವ ಬಣ್ಣದಿ..
ತಂಪು ಗಾಳಿ ಕಂಪ ಸೂಸಿ.. ಬಣ್ಣವೆಲ್ಲ ಜಗದಿ ಹರಡಲು...
ಇದು ಕೊನೆಯಿರದಾ ಪ್ರೇಮ...

ಇದುವೆ.. ಕೊನೆತನಕ ಪ್ರೀತಿಸೊ ಪ್ರೇಮ || ||


---ರಘುರಾಮ್ ಜೋಶಿ---