Tuesday, February 21, 2012

ಇಲ್ಲ..... ನಾವೇ ಮೂರ್ಖರು...



He never leaves us in the first place. When we cry, he's right there.

ನಾವು ಅಂದ್ಕೊಂಡಿದ್ದೆಲ್ಲ ಸಿಕ್ ಬಿಟ್ರೇ ಏನು ಉಳ್ದಿರ್ತಿರ್ಲಿಲ್ಲ ನಮ್ life ಅಲ್ಲಿ ಮಾಡ್ಲಿಕ್ಕೆ ..
ವೊಂಥರಾ boring ಆಗೋಗಿರೋದು ಅಲ್ವ....
ಅದಿಕ್ಕೇ ಅವನಿಗೆ ಎಲ್ಲ ಗೊತ್ತು ಕಣ್ರೀ...

ಬರಗಾಲ ಬಂದು ಭೂಮಿ ಒಣಗಿ ಬರಡಾದಾಗ ಮಾತ್ರ ನೀರಿನ ಹನಿಯ ಬೆಲೆ ಗೋತ್ತಾಗೋದು...

So.......

ನಿಮ್ಮ ಬದುಕು ಅನ್ನೋ ಭೂಮಿ ಇನ್ನೂ ಬರಡಾಗಿಲ್ಲ ಕಣ್ರೀ, ಸುಮ್ನೆ ಬೇಡದೆ ಇರೋದನ್ನ ಮಾಡಿ..
ಬೇಡದೆ ಇರೋ ಥರ ಯೋಚನೆ ಮಾಡಿ..... ಸುಮ್ನೇ ಬರಡು ಮಾಡ್ಕೋಬೇಡಿ.....
ಎಲ್ಲಾರೂ ಅವನ ಮಕ್ಕಳೇ ಕಣ್ರೀ...
ಯಾರನ್ನೂ ಅಷ್ಟು ಸುಲಭವಾಗಿ ಬಿಟ್ಟು ಕೊಡಲ್ಲಾ ಅವ್ನು...
ಸ್ವಲ್ಪ ಪರೀಕ್ಷಾ ಪ್ರಿಯ ಅಷ್ಟೇ...

ಇಲ್ಲ.... ನಾವೇ ಮೂರ್ಖರು... ಯಾಕೆ ಗೊತ್ತಾ...

ಭೂಮಿ ಬರಡಾಯ್ತು ಅಂದ್ ಕೂಡ್ಲೆ ಕಾರಣ ತಿಳಿದು ಕೊಳ್ಳದೇ, ಹುಡುಕದೇ ವಿನಾಕಾರಣ ಅವನನ್ನ ಬಯ್ಯುತ್ತಾ, ಶಪಿಸುತ್ತಾ ಕಾಲ ಕಳಿತೀವಿ...
There is a reason for everything..There is no accident in our Life.. Everything happens for some reason.. ಅನ್ನೋದನ್ನ ಅರ್ಥನೇ ಮಾಡ್ಕೊಳೋದಿಲ್ಲ..
ವೇಳೆಗಾಗಲೇ ಜೊರು ಮಳೆ ಬರತ್ತೆ... ಮತ್ತೇ ಸಮಾಧಾನ ಆಗತ್ತೇ... ಖುಷಿ ಆಗತ್ತೇ..
ಭುವಿ ತುಂಬಾ ಹಸಿರಾಗುತ್ತೆ... ಒಳ್ಳೆ ಪರಿಮಳ ಸೂಸತ್ತೆ.... ಅದೇ ಗುಂಗಲ್ಲೇ ಮೈ ಮರಿತೀವಿ...

ಆಗ ಅದೆಲ್ಲಿಂದ ಬರುತ್ತೋ ಗೊತ್ತಿಲ್ಲ ದುರಹಂಕಾರ ಅನ್ನೋದು ನಮ್ಗೆ...
ಹಳೆಯ ಕಷ್ಟ ಮರೆತು ಹೋಗಿರುತ್ತೇ, ಹಳೆಯ ಬಂಧ ಮರೆತೋಗಿರುತ್ತೆ.... ಮುಂದೆ ನೋಡುವ ಕಣ್ಣು ಕುರುಡಾಗಿರುತ್ತೇ...
ಅಮಲಿನಲ್ಲಿ ಏನೆನೋ ಅಂತೀವೀ... ಮಾಡಿದ್ದು, ಅಂದಿದ್ದು ಅರಿವಿಗೆ ಗೊತ್ತೇ ಆಗಿರಲ್ಲ.....
ಆಗ ಅವನನ್ನ ಮರೆತೇ ಬಿಟ್ಟಿರ್ತೀವಿ

ಸುರಿಸ್ತಾನೆ ಮಳೆನ ಜೋರಾಗಿ..... ಅತಿಯಾಗತ್ತೇ... ಪ್ರವಾಹ ಶುರುವಾಗತ್ತೇ....
ಮತ್ತೆ ಅದೇ... ಶಪಿಸುತ್ತಾ, ಬಯ್ಯುತ್ತಾ ಕೂರ್ತಿವಿ... ಆಗಲೂ ಕಾರಣ ಅರಿತು ಕೊಳ್ಳಲಿಕ್ಕೆ ಕನಿಷ್ಠ ಪ್ರಯತ್ನ ಕೂಡ ಮಾಡೋದಿಲ್ಲ ನಾವು...
ಕೂಗೋದು, ಚೀರೊದು ನಿಲ್ಸಲ್ಲ.... ಆಗೋದು ನಿಲ್ಲಲ್ಲ...

ಇಲ್ಲ... ಅವನನ್ನ ಅರ್ಥನೇ ಮಾಡಿಕೊಳ್ಳೊದಿಲ್ಲ ನಾವು.....
ಆದ್ರೆ ಅವ್ನು ಮಾತ್ರ ನಾವೇನೇ ಮಾಡಿದ್ರೂ ಪ್ರೀತ್ಸೊದು ಮಾತ್ರ ಬಿಡಲ್ಲ... ಪ್ರೀತಿಸ್ತಾನೇ ಇರ್ತಾನೆ....
ಮಾತಾಡಿಸಿ ಹೇಳೊಣವೆಂದ್ರೇ.... ಕೇಳೋ ಕಿವಿ, ಕಣ್ಣು ಏನೂ ಇಲ್ವೇ ನಮ್ಗೆ...
ಎರಡನ್ನೂ ಏನೇನಕ್ಕೋ ಉಪಯೊಗಿಸ್ತೀವಿ ಇದೊಂದಕ್ಕೆ ಬಿಟ್ಟು...

ಪರಮಾತ್ಮ ಅವನು ಹೇಳಿದ್ದನ್ನ ಕೇಳಲಿಕ್ಕೆ, ಕಾಣಲಿಕ್ಕೆ ಅಂತನೇ ಹೃದಯ ಅನ್ನೋದನ್ನ ನಮಗೆ ಕೊಟ್ಟಿದಾನೆ ಕಣ್ರೀ...
Heart is a pure soul of a god..
Atleast.. ಹೃದಯ ಹೇಳಿದ್ದನ್ನಾದ್ರೂ ಕೇಳಬೇಕಲ್ಲ ನಾವು .......ಊಹ್ಹೂ ... ನಾವ್ ಕೇಳಲ್ಲ....
ಅದಿಕ್ಕೇ ಅತಿವೃಷ್ಠಿ, ಅನಾವೃಷ್ಠಿ........ ಆಗಲಾದ್ರೂ ನಮ್ಗೆ ಅವನ ನೆನಪಾಗತ್ತೇನೋ ಮರೀದೆ...
ಅವನ ಮಡಿಲಲ್ಲೇ ಮಗುವಾಗಿರಬಹುದೆಂದು
ನಮ್ಮನ್ನು ನೋಡ್ಕೊಂಡು ಅವ್ನು ಅದೆಷ್ಟು ನೋವು ಅನುಭವಿಸ್ತಾ ಇರಬಹುದೋ ಎನೋ.... ಅಲ್ವ..?
ಅವ್ನಾದ್ರೂ ಏನು ಮಾಡ್ತಾನೆ ಹೇಳಿ... ತನ್ನ ಮಕ್ಕಳಿಗೆ ನೋವಾದ್ರೂ ಧರ್ಮಕ್ಕಾಗಿ, ಒಳ್ಳೆಯದಕ್ಕಾಗಿ ಚಾಟಿ ಬೀಸ್ತಾನೆ ಇರ್ತಾನೆ........
ಇಲ್ಲ.... ನಾವೇ ಮೂರ್ಖರು....

ನಾವು ಕೊನೇತನಕ ಬಯಸೋದು ಅಂದ್ರೇ ನಮ್ಮದೊಂದೇ ಸುಖ, ಸಂತೋಷ, ರಕ್ಷಣೆ ಮಾತ್ರವೆ.... ಪಕ್ಕದಲ್ಲಿರೋರು ಚೀರಾಡ್ತಾ ಸಾಯ್ತಾ ಇದ್ರೂ ಕೂಡ....
ಅದ್ ಬಿಟ್ರೇ ಇನ್ನೇನು ಬೇಡ ನಮಗೆ.... ದುಃಖನೇ ಬೇಡ ಅಂತೀವೀ.....
Ready- ನೇ ಇರಲ್ಲ ನಾವು ಕಷ್ಟ ಅನುಭವಿಸೋದಕ್ಕೆ...
ಆಮೇಲೆ ಒದ್ದಾಡ್ತೀವಿ.... ಬದಲಾಗಿ ಏನೂ ಮಾಡಲ್ಲ... ಹಂಚಿ ತಿನ್ನೋ ಸ್ವಭಾವವೆ ಇಲ್ವ ಹಾಗಾದ್ರೇ....

ಕೊನೇತನಕ ಕೂಗೋದು ಬಿಡಲ್ಲ..... ಆಗೋದು ನಿಲ್ಲಲ್ಲ....
ಇಲ್ಲ..... ನಾವೇ ಮೂರ್ಖರು.....ಅಲ್ವ...? ಹಹ್ಹಹಹ್ಹ


-----by ರಘುರಾಮ್ ಜೋಶಿ




1 comment:

  1. it is good raghu, but every one do the same.

    ReplyDelete

Share ur feelings with me here