Sunday, October 16, 2011

ಯಾರು ನೀನು....!!!?



ಒಮ್ಮೆಯಾದರೂ ನೋಡಿದೀಯಾ
ಯಾಕೆ ಎಂದು ಕೇಳಿದೀಯಾ
ನಿನ್ನ ಹೃದಯದಿ ಹರಿವ ಒಂದು ಭಾವವ....
ಕಾಡಿ ಕಾಡಿ ಮೂಡೋ ಒಂದು ಉಧ್ಗಾರವ..

ಯಾರು ನೀನು....!!?
ಹ್ಞಾ....
ಏಕೆ ಹೀಗೆ
ಏನು ಹಾಗೆ
ಕನ್ನಡೀಲಿ ಕಣ್ಣ ಕಂಬನಿ ಹೊಳೆದ ಹಾಗೆ..
ಕೇಳಿದಾಗ ಏನೋ ಒಂದು ನುಡಿದ ಹಾಗೆ..
ಯಾರು ನೀನು....!!
ಕೇಳಿಲ್ಲಿ.....
ಒಮ್ಮೆ ನೀನು ಕೇಳು ನಿನ್ನಯ ಹೃದಯದಲ್ಲಿರೋ ಸತ್ಯವ...
ನೀನು ಏಕೆ ಹೀಗೆ ಆದೆ ಎಲ್ಲಿ ಹೋಯಿತು ಭಾವನೆ...
ಭಾವವೆಲ್ಲ ಮಾಸಿಹೋಗಲು ನೀನು ಏಕೆ ಇಲ್ಲಿಹೆ....

ಆಸೆಯೆಂಬ ನಶೆಯಲಿರಲು, ಸೋಲು ಕಂಡರೆ ದ್ವೇಷವೇ..?
ಗೆಲುವೇ ಬೇಕು ಎಂದು ನುಡಿವ, ಮನಕೆ ಸೋಲು ಪಾಠವು...
ಬಿದ್ದ ನಂತರ ಕಲಿತ ಪಾಠವ ಎದ್ದು ನಿಂತು, ನಿದ್ದೆಗೆಟ್ಟು ಮರೆಯಬೇಡ...

ಕೇಳುವುದಿಲ್ಲವೇಕೆ ನಿನಗೆ ಪಕ್ಕದಲ್ಲಿರೋ, ಮನದ ಮಾತು..
ಏಕೆ ಹೀಗೆ ಕಿವುಡನಾದೆ, ನಾದ ಕೇಳದೇ ದೂರ್ತನಾದೆ..
ಮನದ ಮಮತೆಯು ತಿಪ್ಪೆಯಲ್ಲಿ, ಎಲ್ಲಿ ಹೋಯಿತು ನಿನ್ನ ತನವು ?...
ಜನರ ಹೃದಯ ಕೊಳಚೆಯೇಕೆ, ಹುಳುವು ಹುಟ್ಟಿ ಕೆಡಿಸಲು..

ಕಾಡೊದಿಲ್ಲವೇ? ಒಮ್ಮೆಯಾದರೂ.....
ಏಕೆ ನೀನು ಹೀಗೆಯೆಂದು..?

ಕನಸ ಕಟ್ಟಿ ಗೂಡ ಹೆಣೆದು...
ಎಲ್ಲಿ ಹೋದೆ ಹಾರಿ ದೂರ.
ತಡೆವೆ ಏಕೆ ಹರಿವ ನದಿಯ...
ಕಟ್ಟಲೇಕೆ ಗೋಡೆಯ.
ಏಕೆ ಬಯಸುವೆ ಸುಖವ ಮಾತ್ರವೇ...
ಸಾರವಿಲ್ಲದ ಹಿಂಡಿದಂಥ ಹಣ್ಣಿನಂತೆ.
ರುಚಿಯ ಅಡುಗೆಯು ಸಿಗುವುದಾಗ...
ಹುಳಿಯು ಕಹಿಯು ಸಿಹಿಯು ಎಲ್ಲ ಇರಲು ಸವಿಯಲು.
ಇದುವೇ ಜೀವನ.. ಗಾಳಿಯಂತೆ ಬೀಸಲೀಗ...
ಬಯಸಲೇಕೆ ನಿಯಂತ್ರಿಸಲು.
ಅದರ ಪಾಡಿಗೆ ಹರಿಯ ಬಿಡಲು...
ತಂಪು ನಿನ್ನದು ಎಂದಿಗೂ.
ಏಕೆ ನೀನು ಇಲ್ಲಿ ಬಂದಿಹೆ.. ಏನು ಸಾಧಿಸ ಹೊರಟಿಹೆ......

ಕಣ್ಣ ಬಿಂಬದಲ್ಲಿ ಕಾಣೋ ಬಿಂಬ
-ದಂತೆ ಮನದ ಪ್ರಶ್ನೆಯು...
ಯಾರು ನೀನು ಎಂದು ಕೇಳಿಕೋ...
ನಿನ್ನ ಹೃದಯವ ತೆರೆದು ಇಟ್ಟುಕೋ...
ಸ್ವಚ್ಛವಾದ ಭಾವವೆಂಬ ದೇವರಲಿ.
ಪುಟ್ಟ ಮಗುವ ನಗುವಿನಂತೆ
ಚಿಗುರು ಒಡೆದ ಬಳ್ಳಿಯಂತೆ
ಹೂವಾಗ ಹೊರಟ ಮೊಗ್ಗಿನಂತೆ
ಮುಗ್ಧವಾದ ಮಗುವ ಮನದಲಿ ಮೂಡೋ ಆ ಮೌನದಂತೆ...
ಏಕೆ ಇನ್ನು ಮುಸುಕು ನಿನಗೆ.....
ಹಕ್ಕಿಯಂತೆ ಹಾರಬಯಸಲು.
ಹೃದಯವಾಗ ನಗುವುದೀಗ ನಿನ್ನ
ಆ ಹುಚ್ಚಾಟಕೆ...
ನಿನ್ನ ಆ ಹೆಬ್ಬಯಕೆಗೆ...
ನಿನ್ನ ಪೆದ್ದು ಯೋಚನೆಗೆ...
ಯಾರು ನೀನು......!! ಎಂದು ಕೇಳಿಕೋ...
ಒಮ್ಮೆ ನೀನು.........
ಏಕೆ ಬಂದಿಹೆ ಎಂದು ಕೇಳಿಕೋ
ಯಾರು ನೀನು.....!! ಯಾರು ನೀನು.....!!

---------ರಘುರಾಮ್ ಜೋಶಿ---------

3 comments:

Share ur feelings with me here